अस्माकं तु विशिष्टा ये तान्निबोध द्विजोत्तम ।
नायका मम सैन्यस्य संज्ञार्थं तान्ब्रवीमि ते ॥
Swami Sivananda(1887–1963)Bhagavad Gita
7. “Know also, O best among the twice-born, the names of those who are the most
distinguished amongst ourselves, the leaders of my army! These I name to thee for thy information.
ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು.
ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು
ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು
ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ
ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ
ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು
ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ
ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ
ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ
ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ
ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ
ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು
ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ
ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ
ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ.
ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು
ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು
ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು
ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ
ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ
ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ
ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ
ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ
ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ.
ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು
ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು
ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು
ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ
ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ
ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ
ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ
ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ
ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ
ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು
ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು
ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ.
ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ
ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ
ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ
ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು
ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ
ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ
ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ?
ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ
ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ
ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ
ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು
ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ
ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ
ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ
ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು
ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ
ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ
ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ
ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು.
ತತಃ ಶ್ವೇತೈರ್ಷಯೈರ್ಯಕ್ತೇ
ಮಹತಿ ಸ್ಕಂದನೇ ಸ್ಥಿತೌ |
ಮಾಧವಃ ಪಾಂಡವಶ್ಚೆವ
ದಿವ್ಯೌ ಶಂಖೌ ಪ್ರದದ್ಧತುಃ ॥
"ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ
ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ
ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ
ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು
ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ
ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
ಅಸ್ಮಾಕಮ್ ತು ವಿಶಿಷ್ಟಾಃ ಯೇ ತಾನ್ ನಿಬೋಧ ದ್ವಿಜೋತ್ತಮ |
ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾ ಅರ್ಥಮ್ ತಾನ್ ಬ್ರವೀಮಿ ತೇ -- ಓ ದ್ವಿಜೋತ್ತಮಾ, ನಮ್ಮ ಕಡೆಯ
ಹೆಚ್ಚಾಳುಗಳು, ನನ್ನ ಪಡೆಯ ಮುಂದಾಳುಗಳು ಯಾರಿದ್ದಾರೆ. ಅವರ ಬಗೆಗೆ ಕೇಳು. ನಿನ್ನ ಸನ್ನೆಗೆಂದು ಅವರನ್ನು
ಹೆಸರಿಸುತ್ತಿದ್ದೇನೆ.
ಒಬ್ಬ ವೀರನಾದವನು ತನ್ನ ಶಕ್ತಿ-ಸಾಮರ್ಥ್ಯ ಕಡಿಮೆ ಇದ್ದರೂ ಕೂಡಾ ಯುದ್ಧಕಾಲದಲ್ಲಿ ಯುಕ್ತಿಯಿಂದ ಕಾರ್ಯ
ನಿರ್ವಹಿಸುತ್ತಾನೆ. ಮುಂದಾಳುವಾದವನು ತನ್ನ ಸೈನ್ಯವನ್ನು, ತನ್ನ ಹಿಂಬಾಲಕರನ್ನು ಹುರಿದುಂಬಿಸುತ್ತಾನೆ.
ತಾವು ಶತ್ರು ಸೈನ್ಯಕ್ಕಿಂತ ಶಕ್ತರು ಎನ್ನುವ ಆತ್ಮವಿಶ್ವಾಸವನ್ನು ತನ್ನ ಸೈನ್ಯದಲ್ಲಿ ತುಂಬುತ್ತಾನೆ. ಆದರೆ ಇಲ್ಲಿ
ದುರ್ಯೋಧನ ತನ್ನ ಸೇನಾಧಿಪತಿ ಭೀಷ್ಮರಲ್ಲಿ ಪರಾಮರ್ಷೆ ಮಾಡುವುದನ್ನು ಬಿಟ್ಟು, ಆಚಾರ್ಯ ದ್ರೋಣರಲ್ಲಿ
ಶತ್ರು ಸೈನ್ಯದ ವೀರರ ಬಗ್ಗೆ ವಿಶಿಷ್ಟವಾಗಿ ಮಾತನಾಡಿ, "ನಿಮ್ಮ ಸನ್ನೆಗೆಂದು ನಮ್ಮ ಸೈನ್ಯದ ಮುಂದಾಳುಗಳ
ಬಗ್ಗೆ ಹೇಳುತ್ತೇನೆ" ಎನ್ನುತ್ತಾನೆ!
7. “Know also, O best among the twice-born, the names of those who are the most distinguished amongst ourselves, the leaders of my army! These I name to thee for thy information.
Source: Bhagavad Gita — pages/page-0028.txt p.28, lines 36-37; pages/page-0028.txt p.28, lines 39-40
Shared across BG 1.1–1.14
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು. ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ. ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ. ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ. ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ? ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು. ತತಃ ಶ್ವೇತೈರ್ಷಯೈರ್ಯಕ್ತೇ ಮಹತಿ ಸ್ಕಂದನೇ ಸ್ಥಿತೌ | ಮಾಧವಃ ಪಾಂಡವಶ್ಚೆವ ದಿವ್ಯೌ ಶಂಖೌ ಪ್ರದದ್ಧತುಃ ॥ "ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
Source: Gitasaroddhara — pages/page-0019.txt p.19, lines 16-29; pages/page-0020.txt p.20, lines 3-28; pages/page-0021.txt p.21, lines 3-32; pages/page-0022.txt p.22, lines 3-5
ಅಸ್ಮಾಕಮ್ ತು ವಿಶಿಷ್ಟಾಃ ಯೇ ತಾನ್ ನಿಬೋಧ ದ್ವಿಜೋತ್ತಮ | ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾ ಅರ್ಥಮ್ ತಾನ್ ಬ್ರವೀಮಿ ತೇ -- ಓ ದ್ವಿಜೋತ್ತಮಾ, ನಮ್ಮ ಕಡೆಯ ಹೆಚ್ಚಾಳುಗಳು, ನನ್ನ ಪಡೆಯ ಮುಂದಾಳುಗಳು ಯಾರಿದ್ದಾರೆ. ಅವರ ಬಗೆಗೆ ಕೇಳು. ನಿನ್ನ ಸನ್ನೆಗೆಂದು ಅವರನ್ನು ಹೆಸರಿಸುತ್ತಿದ್ದೇನೆ. ಒಬ್ಬ ವೀರನಾದವನು ತನ್ನ ಶಕ್ತಿ-ಸಾಮರ್ಥ್ಯ ಕಡಿಮೆ ಇದ್ದರೂ ಕೂಡಾ ಯುದ್ಧಕಾಲದಲ್ಲಿ ಯುಕ್ತಿಯಿಂದ ಕಾರ್ಯ ನಿರ್ವಹಿಸುತ್ತಾನೆ. ಮುಂದಾಳುವಾದವನು ತನ್ನ ಸೈನ್ಯವನ್ನು, ತನ್ನ ಹಿಂಬಾಲಕರನ್ನು ಹುರಿದುಂಬಿಸುತ್ತಾನೆ. ತಾವು ಶತ್ರು ಸೈನ್ಯಕ್ಕಿಂತ ಶಕ್ತರು ಎನ್ನುವ ಆತ್ಮವಿಶ್ವಾಸವನ್ನು ತನ್ನ ಸೈನ್ಯದಲ್ಲಿ ತುಂಬುತ್ತಾನೆ. ಆದರೆ ಇಲ್ಲಿ ದುರ್ಯೋಧನ ತನ್ನ ಸೇನಾಧಿಪತಿ ಭೀಷ್ಮರಲ್ಲಿ ಪರಾಮರ್ಷೆ ಮಾಡುವುದನ್ನು ಬಿಟ್ಟು, ಆಚಾರ್ಯ ದ್ರೋಣರಲ್ಲಿ ಶತ್ರು ಸೈನ್ಯದ ವೀರರ ಬಗ್ಗೆ ವಿಶಿಷ್ಟವಾಗಿ ಮಾತನಾಡಿ, "ನಿಮ್ಮ ಸನ್ನೆಗೆಂದು ನಮ್ಮ ಸೈನ್ಯದ ಮುಂದಾಳುಗಳ ಬಗ್ಗೆ ಹೇಳುತ್ತೇನೆ" ಎನ್ನುತ್ತಾನೆ!
Source: Bhagavad Gita Pravachana — pages/page-0015.txt p.15, lines 29-37; pages/page-0016.txt p.16, lines 3-8
(7) ‘O best among brahmanas! Now you should know the main warriors and leaders in my army. For your knowledge, I am naming them.’
Source: The Bhagavad Gita — structure/page-0036.json p.36, lines 1-1; pages/page-0037.txt p.37, lines 34-34; pages/page-0038.txt p.38, lines 1-2
Reader discussion
No public reader discussion yet.