6. “The strong Yudhamanyu and the brave Uttamaujas, the son of Subhadra (Abhimanyu,
the son of Arjuna), and the sons of Draupadi, all of great chariots (great heroes).
ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು.
ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು
ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು
ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ
ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ
ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು
ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ
ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ
ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ
ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ
ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ
ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು
ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ
ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ
ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ.
ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು
ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು
ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು
ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ
ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ
ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ
ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ
ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ
ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ.
ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು
ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು
ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು
ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ
ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ
ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ
ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ
ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ
ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ
ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು
ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು
ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ.
ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ
ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ
ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ
ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು
ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ
ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ
ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ?
ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ
ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ
ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ
ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು
ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ
ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ
ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ
ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು
ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ
ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ
ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ
ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು.
ತತಃ ಶ್ವೇತೈರ್ಷಯೈರ್ಯಕ್ತೇ
ಮಹತಿ ಸ್ಕಂದನೇ ಸ್ಥಿತೌ |
ಮಾಧವಃ ಪಾಂಡವಶ್ಚೆವ
ದಿವ್ಯೌ ಶಂಖೌ ಪ್ರದದ್ಧತುಃ ॥
"ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ
ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ
ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ
ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು
ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ
ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
ಯುಧಾಮನ್ಯುಃ ಚ ವಿಕ್ರಾಂತ ಉತ್ತಮೌಜಾಃ ಚ ವೀರ್ಯವಾನ್ |
ಸೌಭದ್ರಃ ದ್ರೌಪದೇಯಾಃ ಚ ಸರ್ವೇ ಏವ ಮಹಾರಥಾಃ - ಯುಧಾಮನ್ಯುವು ಕೆಚ್ಚೆದೆಯವನು. ಉತ್ತಮೌಜ
ಕೂಡಾ ಕಡುಗಲಿ. ಸುಭದ್ರೆಯ ಮಗ, ದ್ರೌಪದಿಯ ಮಕ್ಕಳು ಎಲ್ಲರೂ ನಿಶ್ಚಯವಾಗಿ ಹಿರಿಯ ತೇರಾಳುಗಳೇ..
ಪಾಂಡವ ಸೇನೆಯನ್ನು ಕಂಡು ಅಂತರಂಗದಲ್ಲಿ ಗಾಬರಿಗೊಂಡ ದುರ್ಯೋಧನನು, ಒಂದೇ ಮನೆಯಿಂದ ಬಂದ
ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಾನೆ. ಯುಧಾಮನ್ಯ ಹಾಗೂ ಉತ್ತಮೌಜ ಇವರು ದ್ರುಪದನ
ಇನ್ನಿಬ್ಬರು ಮಕ್ಕಳು. ಇವರನ್ನು ದುರ್ಯೋಧನ ವೀರ ನೆಡೆಯುಳ್ಳ ವಿಕ್ರಾಂತರು ಎಂದು ಸಂಬೋಧಿಸುತ್ತಾನೆ.
ಇಷ್ಟೇ ಅಲ್ಲ ಆತ ಸುಭದ್ರೆಯ ಮಗ ಅಭಿಮನ್ಯು ಹಾಗೂ ಇನ್ನೂ ಪ್ರಾಯಪ್ರಭುದ್ದರಲ್ಲದ ಸುಮಾರು
ಹದಿಮೂರರಿಂದ ಹದಿನೆಂಟು ಪ್ರಾಯದ ಐದು ಮಂದಿ ದ್ರೌಪದಿಯ ಮಕ್ಕಳನ್ನು ಮಹಾರಥರು ಎಂದು
ಸಂಬೋಧಿಸುತ್ತಾನೆ!
ಇಲ್ಲಿ ಸ್ಪಷ್ಟವಾಗಿ ನಾವು ಕಂಡು ಕೊಳ್ಳಬೇಕಾದ ವಿಷಯವೆಂದರೆ, ಒಮ್ಮೆ ನಾವು ಭಯಕ್ಕೊಳಪಟ್ಟರೆ ನಮಗೆ ಹಗ್ಗ
ಹಾವಿನಂತೆ ಕಾಣಲಾರಂಭಿಸುತ್ತದೆ. ಇಂತಹ ಸಂಧರ್ಭದಲ್ಲಿ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ ಕೂಡಾ
ವ್ಯರ್ಥವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದೂ ಕೂಡಾ, ಯುದ್ಧಕ್ಕೆ ಮೊದಲು ತನ್ನ ಸೈನ್ಯವನ್ನು
ಹುರಿದುಂಬಿಸುವುದನ್ನು ಬಿಟ್ಟು, ದುರ್ಯೋಧನ ಪಾಂಡವ ಸೈನ್ಯದಲ್ಲಿನ ವೀರರ ಬಗ್ಗೆ ಮಾತನಾಡುತ್ತಿರುವುದು
ಸ್ಪಷ್ಟವಾಗಿ ಆತನ ಮನಃಸ್ಥಿತಿಯನ್ನು ಸೂಚಿಸುತ್ತದೆ. ಆತ ಇಲ್ಲಿ ಹನ್ನೊಂದು ಮಂದಿ ವೀರರ ಹೆಸರನ್ನು
ಹೇಳಿರುವುದನ್ನು ನಾವು ಗಮನಿಸಬೇಕು(ಸಾತ್ಯಕಿ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ,
ಪುರುಜಿತ್, ಕುಂತಿಭೋಜ,ಶೈಭ್ಯ, ಯುಧಾಮನ್ಯು ಹಾಗೂ ಉತ್ತಮೌಜ). ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ
ಸೈನ್ಯವನ್ನು ಪ್ರತಿನಿಧಿಸುವ ವೀರರಿದ್ದರೂ ಕೂಡಾ, ಆತನಿಗೆ ಏಳು ಅಕ್ಷೋಹಿಣಿ ಸೈನ್ಯವಿರುವ ಪಾಂಡವ
ಸೈನ್ಯದಲ್ಲಿ ಹನ್ನೊಂದು ಮಂದಿ ವೀರರು ಎದ್ದು ಕಾಣಲಾರಂಭಿಸುತ್ತಾರೆ! ಭಗವಂತನಿಂದ ದೂರ ನಿಂತ
ಅಧರ್ಮಿಯಾದ ಪ್ರತಿಯೊಬ್ಬರ ಪಾಡು ಇಷ್ಟೇ. ಅವರು ಎಂದೆಂದೂ ಅಂತರಂಗದ ಭಯದಲ್ಲೇ ಬದುಕುತ್ತಾರೆ
ಹಾಗೂ ಆ ಭಯವನ್ನು ಮುಚ್ಚಿಡಲು ಇಲ್ಲ ಸಲ್ಲದ ಮಾತನ್ನಾಡುತ್ತಾರೆ. ಒಬ್ಬ ದುಷ್ಟ ಕೆಟ್ಟದಾಗಿ ಗೌರವವಿಲ್ಲದೆ
ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ. ಅಂತವರಲ್ಲಿ
ಎಷ್ಟೇ ಶಕ್ತಿ ಇದ್ದರೂ ಕೂಡಾ ಅದು ಎಂದೂ ಅವರ ರಕ್ಷಣೆ ಮಾಡಲಾರದು. ಏಕೆಂದರೆ ಅವರಿಗೆ ತಮ್ಮ ಶಕ್ತಿಯ
ಬಗ್ಗೆ ಆತ್ಮವಿಶ್ವಾಸವಿರುವುದಿಲ್ಲ. ಇದು ಇಲ್ಲಿ ನಾವು ಕಂಡುಕೊಳ್ಳಬೇಕಾದ ಮನಃಶಾಸ್ತ್ರ.
6. “The strong Yudhamanyu and the brave Uttamaujas, the son of Subhadra (Abhimanyu, the son of Arjuna), and the sons of Draupadi, all of great chariots (great heroes).
Source: Bhagavad Gita — pages/page-0028.txt p.28, lines 30-31; pages/page-0028.txt p.28, lines 33-34
Shared across BG 1.1–1.14
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು. ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ. ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ. ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ. ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ? ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು. ತತಃ ಶ್ವೇತೈರ್ಷಯೈರ್ಯಕ್ತೇ ಮಹತಿ ಸ್ಕಂದನೇ ಸ್ಥಿತೌ | ಮಾಧವಃ ಪಾಂಡವಶ್ಚೆವ ದಿವ್ಯೌ ಶಂಖೌ ಪ್ರದದ್ಧತುಃ ॥ "ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
Source: Gitasaroddhara — pages/page-0019.txt p.19, lines 16-29; pages/page-0020.txt p.20, lines 3-28; pages/page-0021.txt p.21, lines 3-32; pages/page-0022.txt p.22, lines 3-5
ಯುಧಾಮನ್ಯುಃ ಚ ವಿಕ್ರಾಂತ ಉತ್ತಮೌಜಾಃ ಚ ವೀರ್ಯವಾನ್ | ಸೌಭದ್ರಃ ದ್ರೌಪದೇಯಾಃ ಚ ಸರ್ವೇ ಏವ ಮಹಾರಥಾಃ - ಯುಧಾಮನ್ಯುವು ಕೆಚ್ಚೆದೆಯವನು. ಉತ್ತಮೌಜ ಕೂಡಾ ಕಡುಗಲಿ. ಸುಭದ್ರೆಯ ಮಗ, ದ್ರೌಪದಿಯ ಮಕ್ಕಳು ಎಲ್ಲರೂ ನಿಶ್ಚಯವಾಗಿ ಹಿರಿಯ ತೇರಾಳುಗಳೇ.. ಪಾಂಡವ ಸೇನೆಯನ್ನು ಕಂಡು ಅಂತರಂಗದಲ್ಲಿ ಗಾಬರಿಗೊಂಡ ದುರ್ಯೋಧನನು, ಒಂದೇ ಮನೆಯಿಂದ ಬಂದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಾನೆ. ಯುಧಾಮನ್ಯ ಹಾಗೂ ಉತ್ತಮೌಜ ಇವರು ದ್ರುಪದನ ಇನ್ನಿಬ್ಬರು ಮಕ್ಕಳು. ಇವರನ್ನು ದುರ್ಯೋಧನ ವೀರ ನೆಡೆಯುಳ್ಳ ವಿಕ್ರಾಂತರು ಎಂದು ಸಂಬೋಧಿಸುತ್ತಾನೆ. ಇಷ್ಟೇ ಅಲ್ಲ ಆತ ಸುಭದ್ರೆಯ ಮಗ ಅಭಿಮನ್ಯು ಹಾಗೂ ಇನ್ನೂ ಪ್ರಾಯಪ್ರಭುದ್ದರಲ್ಲದ ಸುಮಾರು ಹದಿಮೂರರಿಂದ ಹದಿನೆಂಟು ಪ್ರಾಯದ ಐದು ಮಂದಿ ದ್ರೌಪದಿಯ ಮಕ್ಕಳನ್ನು ಮಹಾರಥರು ಎಂದು ಸಂಬೋಧಿಸುತ್ತಾನೆ! ಇಲ್ಲಿ ಸ್ಪಷ್ಟವಾಗಿ ನಾವು ಕಂಡು ಕೊಳ್ಳಬೇಕಾದ ವಿಷಯವೆಂದರೆ, ಒಮ್ಮೆ ನಾವು ಭಯಕ್ಕೊಳಪಟ್ಟರೆ ನಮಗೆ ಹಗ್ಗ ಹಾವಿನಂತೆ ಕಾಣಲಾರಂಭಿಸುತ್ತದೆ. ಇಂತಹ ಸಂಧರ್ಭದಲ್ಲಿ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ ಕೂಡಾ ವ್ಯರ್ಥವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದೂ ಕೂಡಾ, ಯುದ್ಧಕ್ಕೆ ಮೊದಲು ತನ್ನ ಸೈನ್ಯವನ್ನು ಹುರಿದುಂಬಿಸುವುದನ್ನು ಬಿಟ್ಟು, ದುರ್ಯೋಧನ ಪಾಂಡವ ಸೈನ್ಯದಲ್ಲಿನ ವೀರರ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಆತನ ಮನಃಸ್ಥಿತಿಯನ್ನು ಸೂಚಿಸುತ್ತದೆ. ಆತ ಇಲ್ಲಿ ಹನ್ನೊಂದು ಮಂದಿ ವೀರರ ಹೆಸರನ್ನು ಹೇಳಿರುವುದನ್ನು ನಾವು ಗಮನಿಸಬೇಕು(ಸಾತ್ಯಕಿ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ,ಶೈಭ್ಯ, ಯುಧಾಮನ್ಯು ಹಾಗೂ ಉತ್ತಮೌಜ). ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಪ್ರತಿನಿಧಿಸುವ ವೀರರಿದ್ದರೂ ಕೂಡಾ, ಆತನಿಗೆ ಏಳು ಅಕ್ಷೋಹಿಣಿ ಸೈನ್ಯವಿರುವ ಪಾಂಡವ ಸೈನ್ಯದಲ್ಲಿ ಹನ್ನೊಂದು ಮಂದಿ ವೀರರು ಎದ್ದು ಕಾಣಲಾರಂಭಿಸುತ್ತಾರೆ! ಭಗವಂತನಿಂದ ದೂರ ನಿಂತ ಅಧರ್ಮಿಯಾದ ಪ್ರತಿಯೊಬ್ಬರ ಪಾಡು ಇಷ್ಟೇ. ಅವರು ಎಂದೆಂದೂ ಅಂತರಂಗದ ಭಯದಲ್ಲೇ ಬದುಕುತ್ತಾರೆ ಹಾಗೂ ಆ ಭಯವನ್ನು ಮುಚ್ಚಿಡಲು ಇಲ್ಲ ಸಲ್ಲದ ಮಾತನ್ನಾಡುತ್ತಾರೆ. ಒಬ್ಬ ದುಷ್ಟ ಕೆಟ್ಟದಾಗಿ ಗೌರವವಿಲ್ಲದೆ ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ. ಅಂತವರಲ್ಲಿ ಎಷ್ಟೇ ಶಕ್ತಿ ಇದ್ದರೂ ಕೂಡಾ ಅದು ಎಂದೂ ಅವರ ರಕ್ಷಣೆ ಮಾಡಲಾರದು. ಏಕೆಂದರೆ ಅವರಿಗೆ ತಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿರುವುದಿಲ್ಲ. ಇದು ಇಲ್ಲಿ ನಾವು ಕಂಡುಕೊಳ್ಳಬೇಕಾದ ಮನಃಶಾಸ್ತ್ರ.
Source: Bhagavad Gita Pravachana — pages/page-0014.txt p.14, lines 32-35; pages/page-0015.txt p.15, lines 3-27
(6) ‘The powerful Yudhamanyu,12 the brave Uttamoujas,13 the son of Subhadra,14 the sons of Draupadi—all of them are maharathas.’
Source: The Bhagavad Gita — structure/page-0036.json p.36, lines 1-1; pages/page-0037.txt p.37, lines 29-32
Reader discussion
No public reader discussion yet.